ಪುತ್ತೂರು: ಹೆರಿಗೆ ಸಮಯ ಮಗು ಮೃತ್ಯು ಸಂಶಯ ಹಿನ್ನೆಲೆ – ಪ್ರಕರಣ ದಾಖಲು

ಪುತ್ತೂರು: ಹೆರಿಗೆ ಸಮಯ ಮಗು ಮೃತಪಟ್ಟ ಕುರಿತು ಸಂಶಯದ ಹಿನ್ನೆಲೆಯಲ್ಲಿ ದೂರುದಾರರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೆಳ್ಳಾರೆ ಗ್ರಾಮದ ಮಿಲನ್ ಎಂಬವರ ಪತ್ನಿ ಚೈತ್ರ ಅವರು ಮೊದಲನೆ ಮಗುವಿನ ಗರ್ಭಿಣಿಯಾಗಿದ್ದು, ಪುತ್ತೂರು ಸಿಟಿ ಆಸ್ಪತ್ರೆಯ ಹೆರಿಗೆ ತಜ್ಞೆ ಡಾ. ಕೃತಿ ಎಂಬವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಜ.15ರಂದು ಹೆರಿಗೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಜ.13ಕ್ಕೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದು, ಅದರಂತೆ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿದ್ದ …

Continue Reading

ಇಂದಿನಿಂದ 3 ದಿನಗಳ ಇತಿಹಾಸ ಪ್ರಸಿದ್ದವಾದ ಎಣ್ಮೂರು ಮಖಾಂ ಉರೂಸ್ ಪ್ರಾರಂಭ.

ಕಡಬ. ಪ್ರಸಿದ್ದ ಕ್ಷೇತ್ರವಾದ ಎಣ್ಮೂರು ಮಖಾಂ ಉರೂಸ್ ಕಾರ್ಯಕ್ರಮವು  ಇಂದು ರಾತ್ರಿಯಿಂದ ಪ್ರಾರಂಭಗೊಳ್ಳಲಿದೆ.  ಹಲವಾರು ಉಮರಾ ಉಲಮಾ ನಾಯಕರು ಈ 3 ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.    

Continue Reading

ಮನೆ ಅಡಿಪಾಯ ಅಗೆಯುವಾಗ ಪತ್ತೆಯಾದ ನಿಧಿ* *🟪⭕ 1 ಕೆಜಿ ಚಿನ್ನದ ಆಭರಣ ವಶಕ್ಕೆ*

ಗದಗ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣವಾದ ಲಕ್ಕುಂಡಿ ಗ್ರಾಮದಲ್ಲಿ ಹಳೆಯ ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಂದಾಜು ಒಂದು ಕೆಜಿ ತೂಕದ ಪುರಾತನ ಚಿನ್ನಾಭರಣಗಳು ಪತ್ತೆಯಾಗಿವೆ. ಗ್ರಾಮದ 4ನೇ ವಾರ್ಡ್ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವವರು ತಮ್ಮ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಿ ಭೂಮಿ ಅಗೆಯುತ್ತಿದ್ದರು. ಈ ವೇಳೆ ಮಣ್ಣಿನೊಳಗೆ ತಾಮ್ರದ ಚೆಂಬೊಂದು ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದಾಗ ಒಳಗಿದ್ದ ಚಿನ್ನದ ರಾಶಿಯನ್ನು ಕಂಡು ಮನೆಯವರು ಬೆರಗಾಗಿದ್ದಾರೆ. ಪತ್ತೆಯಾದ ನಿಧಿಯಲ್ಲಿ ಪ್ರಾಚೀನ ಕಾಲದ …

Continue Reading

ಸರ್ವೆ ಗ್ರಾಮದ ನೇರೋಳ್ತಡ್ಕ ನಿವಾಸಿ ಅಶೋಕ ನಾಯ್ಕ ನಿಧನ*

ಪುತ್ತೂರು ತಾಲೂಕು ಸರ್ವೆ  ಗ್ರಾಮದ ನೇರೋಳ್ತಡ್ಕ ನಿವಾಸಿ ಅಶೋಕ ನಾಯ್ಕ ಅವರು ಸ್ವಗೃಹದಲ್ಲಿ   ನಿದನರಾದರು . ಮೃತರು ತಾಯಿ , ಸಹೋದರ ರಾಜೇಶ್ ಅವರನ್ನು ಅಗಲಿದ್ದಾರೆ .  

Continue Reading