ಪ್ರಾಕೃತಿಕ ವಿಕೋಪದಿಂದ ಉಂಟಾದ ಅಡಿಕೆ,ತೆಂಗು ಇನ್ನಿತರ ಕೃಷಿ ನಾಶದಿಂದ ಉಂಟಾಗುವ ನಷ್ಟಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ಒದಗಿಸಬೇಕು 🖊️ ಎಂ.ಎ. ರಫೀಕ್ ಸದಸ್ಯರು ಗ್ರಾಮ ಪಂಚಾಯತ್ ಸವಣೂರು (ಅಧ್ಯಕ್ಷರು SDPI ಬೆಳ್ಳಾರೆ ಬ್ಲಾಕ್)
- admin_18np
- August 20, 2025
- Blog
- 0 Comments
ಸವಣೂರು: ಆಗಸ್ಟ್: 20 ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಗಾಳಿಗೆ ಸವಣೂರು ಗ್ರಾಮದ ಇಡ್ಯಾಡಿ,ಅತಿಕರೆ,ಅರೆಲ್ತಡಿ, ಕೆಡೆಂಜಿ ಹಾಗೂ ಇನ್ನೂ ಅನೇಕ ಸ್ಥಳಗಳಲ್ಲಿ ಜೀವನ ನಡೆಸಲು ಆದಾಯದ ಮೂಲವಾಗಿರುವ
ಅಡಿಕೆ, ಮತ್ತು ತೆಂಗು ಕೃಷಿಕರು ಕಷ್ಟಪಟ್ಟು ಬೆಳೆಸಿದ ಬಹಳಷ್ಟು ಜನರ ಕೃಷಿಯು ಸಂಪೂರ್ಣ ನಾಶವಾಗಿರುತ್ತದೆ. ಇದು ಒಂದು ಪ್ರಾಕೃತಿಕ ವಿಕೋಪ ವಾಗಿದ್ದು, ರಾಜ್ಯ ಸರ್ಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಈಗ ಪರಿಹಾರಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಈ ರೀತಿಯ ಕೃಷಿ ನಾಶಗಳನ್ನು ಕೂಡ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ ತರಬೇಕು. ಅಥವಾ ತುರ್ತಾಗಿ ಸರಕಾರ ತೋಟಗಾರಿಕೆ ಇಲಾಖೆಯ ಮೂಲಕ ಕೃಷಿ ನಾಶ ನಷ್ಟ ಅನುಭವಿಸಿರುವ ಕೃಷಿಕರಿಗೆ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರವನ್ನು ಒದಗಿಸಬೇಕೆಂದು ಸರಕಾರವನ್ನು, ಸಂಬಂಧಪಟ್ಟ ಸಚಿವರನ್ನು, ತೋಟಗಾರಿಕೆ ಇಲಾಖೆಯನ್ನು ಕೃಷಿಕರ ಯೋಗಕ್ಷೇಮವನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಮೂಲಕ ಒತ್ತಾಯಿಸುತ್ತೇನೆ.
✍️18 ನ್ಯೂಸ್ ಪುತ್ತೂರು .




