ಲೋಕಾಯುಕ್ತದಿಂದ ಬಂಧಿತರಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯವರಿಂದ ಸರಕಾರಿ ಕಚೇರಿ ದುರುಪಯೋಗ ಅಮಾನತುಗೊಳಿಸಲು ನವೀನ್ ರೈ ಕೈಕಾರ ಮನವಿ

ಪುತ್ತೂರು: ಸರಕಾರಿ ಕಚೇರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯವರನ್ನು ಅಮಾನತು ಮಾಡಬೇಕು ಎಂದು ಪುತ್ತೂರಿನ ನವೀನ್ ರೈ ಕೈಕಾರ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕೃಷ್ಣವೇಣಿ ಅವರು ಸರಕಾರದ ಆದೇಶ ಇಲ್ಲದಿದ್ದರೂ ಅಕ್ರಮ ಪ್ರವೇಶ ಮಾಡಿ ಸರಕಾರಿ ಕಛೇರಿಯನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಉಳ್ಳಾಲ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ. ಉಳ್ಳಾಲ ಗ್ರಾಮದ ಸರ್ವೆ ನಂಬರ್ 279/5ರಲ್ಲಿ 1.39 ಎಕರೆಯಲ್ಲಿ ನಿರ್ಮಿಸಿದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ …

Continue Reading

ಕರ್ನಾಟಕ ಸರ್ಕಾರ ನಕಲಿ ಸುದ್ದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ; ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸುವ ಪ್ರಸ್ತಾವನೆಯನ್ನು ಮಂಡಿಸಿದ ಕಾನೂನು.

ಬೆಂಗಳೂರು: ಸಾಮಾಜಿಕ ಮಾಧ್ಯಮ ಬಳಕೆದಾರರು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುವಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 10 ಲಕ್ಷ ರೂ.ಗಳ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಸರ್ಕಾರವು ತಪ್ಪು ಮಾಹಿತಿಯ ಮೇಲೆ ನಿಗಾ ಇಡಲು ಕರಡು ಕಾನೂನಲ್ಲಿ ಪ್ರಸ್ತಾಪಿಸಿದೆ.  

Continue Reading

ಸಾರ್ವಜನಿಕ ಹಿತ ದೃಷ್ಟಿಯಿಂದ ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳು ಒಂದೇ ಕಡೆ 2 ವರ್ಷಗಳಿಂದ ಹೆಚ್ಚಾಗಿ ಕೆಲಸ ಮಾಡುವಂತಹ ನೌಕರರನ್ನು ಕೂಡ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು.-18 ನ್ಯೂಸ್ ಪುತ್ತೂರು .

ಸಾರ್ವಜನಿಕರ ಪರ ನಮ್ಮ ಅಭಿಪ್ರಾಯ.. (1) 18 ನ್ಯೂಸ್ ಪುತ್ತೂರು ಡಿಜಿಟಲ್ ಮಾಧ್ಯಮ .  ವಿಷಯ : 2 ವರ್ಷಗಳಿಂದ ಹೆಚ್ಚಾಗಿ ಒಂದೇ ಕಡೆ ಇರುವ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ …. ಸಾರ್ವಜನಿಕ ಹಿತ ದೃಷ್ಟಿಯಿಂದ , ಗ್ರಾಮ ಪಂಚಾಯತ್ , ಮೆಸ್ಕಾಂ ಕಚೇರಿ ,ಹಾಗೂ ಎಲ್ಲಾ ರೀತಿಯ ಸರ್ಕಾರಿ ಕಚೇರಿಗಳಲ್ಲಿ 3 ರಿಂದ 6 ವರ್ಷಗಳ ಕಾಲ ಕೆಲವು ಸರ್ಕಾರಿ ಅಧಿಕಾರಿಗಳು ಒಂದೇ ಜಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವುದು , ಕಂಡು ಬರುತ್ತಿದೆ.  ಒಂದೇ ಜಾಗದಲ್ಲಿ ಸರ್ಕಾರಿ  ಕಚೇರಿಯಲ್ಲಿ 2 ವರ್ಷಗಳಿಂದ …

Continue Reading

ಇತ್ತೀಚಿನ ಸುದ್ದಿಗಳು 7 ಎಎಸ್‌ಐ, 31 ಹೆಚ್.ಸಿ.,78 ಪಿಸಿಗಳ ಸಹಿತ ದ.ಕ.ಜಿಲ್ಲೆಯ 116 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

ಪುತ್ತೂರು:ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಕಡಬ, ವಿಟ್ಲ, ಬೆಳ್ಳಾರೆ, ಸುಬ್ರಹ್ಮಣ್ಯ ಸೇರಿದಂತೆ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿನ 7 ಮಂದಿ ಎ.ಎಸ್.ಐ, 31 ಮಂದಿ ಹೆಡ್‌ಾನ್‌ಸ್ಟೇಬಲ್, 78 ಮಂದಿ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆಗೊಳಿಸಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಆದೇಶ ಹೊರಡಿಸಿದ್ದಾರೆ. ಹೆಡ್‌ಾನ್‌ಸ್ಟೇಬಲ್‌ಗಳು: ಸಿವಿಲ್ ಹೆಡ್ ಕಾನ್‌ಸ್ಟೇಬಲ್ ವಿಭಾಗದಲ್ಲಿ ಸುಳ್ಯ ಠಾಣೆಯಿಂದ ಪುರುಷೋತ್ತಮ ಟಿ.ಆರ್ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಸುಬ್ರಹ್ಮಣ್ಯ ಠಾಣೆಯಿಂದ ಮಹಮ್ಮದ್ ಇಟ್ಬಾಲ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ದಿವ್ಯಾ ಅವರು …

Continue Reading

ಇತ್ತೀಚಿನ ಸುದ್ದಿಗಳು ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪುರಂದರ ರೈ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ತಿಂಗಳಾಡಿ ಆಯ್ಕೆ

ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪುರಂದರ ರೈ ಕೋರಿಕ್ಕಾರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ನೌಶಾದ್ ತಿಂಗಳಾಡಿ ಆಯ್ಕೆಯಾಗಿದ್ದಾರೆ.ಶಾಸಕ ಅಶೋಕ್ ಕುಮಾರ್ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ ಅವರ ಶಿಫಾರಸಿನ ಮೇರೆಗೆ ಈ ಆಯ್ಕೆ ನಡೆದಿದೆ.ಪುರಂದರ ರೈ ನೌಶಾದ್ ತಿಂಗಳಾಡಿ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಾರೆಪುಣಿ ಹಾಗೂ ಇಸ್ಮಾಯಿಲ್ ಖಲಂದರಿಯಾ, ಕೋಶಾಧಿಕಾರಿಯಾಗಿ ಶರೀಫ್ ಗಟ್ಟಮನೆ ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಹಾರಿಸ್ ಬೋಳೋಡಿ, ಎಸ್.ಸಿ ಘಟಕದ ಅಧ್ಯಕ್ಷರಾಗಿ ಸೋಮಯ್ಯ ತಿಂಗಳಾಡಿ, ಯೂತ್ ಅಧ್ಯಕ್ಷರಾಗಿ ಶಾಫಿ ಬೇರಿಕೆ, ಕಾರ್ಮಿಕ ಘಟಕದ …

Continue Reading

ಮಾರಾಟ / ಖರೀದಿ .

ಮಾರಾಟಕ್ಕಿದೆ : 4 BHK ಮನೆ RCC ಮನೆ 25 ಸೆಂಟ್ಸ್ ಜಾಗ NEAR ALL FACILITIES AREA ಬೆಳ್ಳಾರೆ MOB : 9686472257 ಮನೆ ಜಾಗ ಮಾರಾಟಕ್ಕಿದೆ ಸಂಟ್ಯಾರ್ ಕುಂಬ ಸ್ಥಳ : ಪುತ್ತೂರು ಕುಂಬ್ರ ನಿಯರ್ ಜಾಗ : 42 ಸೆನ್ಸ್ ಜಾಗ ವರ್ಗ ಮನೆ : 4 ಬೆಡ್ ರೂಮ್ ICC ಮನೆ ನ್ಯಾಷನಲ್ ಹೈವೇ ಮೈನ್ ರೋಡ್ ಇಂದ 100 ಮೀಟರ್ ತೆಂಗಿನ ಮರ: 15 ಅಡಿಕೆ ಮರ : 50 ಪಸಲು ಹಣ್ಣು ಹಂಪಲು ಮರಗಲಿವೆ ನೀರು …

Continue Reading

ಸರ್ವೆ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ.! – ಕ್ಯಾಂಡಲ್ ಮೊರೆ ಹೋದ ವಿದ್ಯುತ್ ಬಳಕೆದಾರರು- ಇನ್ನೆಷ್ಟು ದಿನ ಕತ್ತಲೆಯಲ್ಲಿರಬೇಕು? ಜನರ ಆಕ್ರೋಶ.

ಪುತ್ತೂರು: ಮೆಸ್ಕಾಂ ಸವಣೂರು ಉಪಕೇಂದ್ರ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ತಲೆದೋರಿದ್ದು ವಿದ್ಯುತ್ ಬಳಕೆದಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕೆಲವು ಸಮಯಗಳ ಹಿಂದೆಯೇ ವಿದ್ಯುತ್ ಕಡಿತ ಸಮಸ್ಯೆಯಿದ್ದು ಇದೀಗ ಮಳೆ ಪ್ರಾರಂಭವಾದ ಬಳಿಕ ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಸರ್ವೆ, ಸೊರಕೆ, ಕಲ್ಪಣೆ, ರೆಂಜಲಾಡಿ, ಭಕ್ತಕೋಡಿ ಮತ್ತಿತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ರಾತ್ರಿ ವೇಳೆಯಲ್ಲಂತೂ ವಿದ್ಯುತ್ ಇರುವುದೇ ಇಲ್ಲ ,ಎಂದು ಆ ಭಾಗದ ಜನರು ತಿಳಿಸಿದ್ದಾರೆ. ಪದೇ-ಪದೇ ವಿದ್ಯುತ್ ಕಡಿತ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದು ಮೆಸ್ಕಾಂ ವಿರುದ್ಧ ಪ್ರತಿಭಟನೆ ಮಾಡುವ …

Continue Reading

ನೆಕ್ಕಿಲಾಡಿ: ಕುಮಾರಧಾರ ನದಿಯಲ್ಲಿ ಮೊಸಳೆ ಪತ್ತೆ .

ಉಪ್ಪಿನಂಗಡಿ: 34 ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಮೊಸಳೆ ನೋಡಲು ಹೋದವರನ್ನು ಕಂಡು ಮೊಸಳೆಯು ಬಾಯಗಳಿಸಿ ಶಬ್ದಗೈದು ಆಕ್ರಮಣಕಾರಿಯಂತೆ ಇವರ ಕಡೆ ನೋಡಿ ನದಿ ನೀರಿಗೆ ಇಳಿದು ಹೋದ ಘಟನೆ ಜೂ.18ರಂದು ಸಂಜೆ ನಡೆದಿದೆ. ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು ಮಕ್ಕಳು ಸ್ಥಳೀಯ ನಿವಾಸಿಗಳಾದ ಅಝೀಝ್ ಪಿ.ಟಿ. ಹಾಗೂ ಇತರರಲ್ಲಿ ತಿಳಿಸಿದ್ದು, ಅವರು ಅದೇನೆಂದು …

Continue Reading

💥| Israel-Iran War: ಇಸ್ರೇಲ್ ಮೇಲೆ ಸೆಜ್ಜಿಲ್ ಕ್ಷಿಪಣಿ ದಾಳಿಗೆ ಸ್ಕೆಚ್.. ಯುದ್ಧ ಮತ್ತಷ್ಟು ತೀವ್ರ # 18 ನ್ಯೂಸ್ ಪುತ್ತೂರು

ಇಸ್ರೇಲ್‌ನಲ್ಲಿ ಯುದ್ಧದಿಂದಾಗಿ ಈವರೆಗೆ 24 ಜನರು ಸಾವು ‘ಇರಾನ್ ಮೇಲೆ ಯುದ್ಧ ಬೇಡ ಎಂದು ಆಗ್ರಹ ಈವರೆಗೆ ಇಸ್ರೇಲ್ ಮೇಲೆ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ಇರಾನ್‌ನ ಡೋನ್‌ಗಳನ್ನ ತಡೆಯುವಲ್ಲಿ ಇಸ್ರೇಲ್ ಯಶಸ್ವಿ ನಗರ ಪ್ರದೇಶಗಳನ್ನ ನಾಶಪಡಿಸಿರುವ 20ಕ್ಕೂ ಹೆಚ್ಚು ಕ್ಷಿಪಣಿ ಇರಾನ್ ದಾಳಿಯಿಂದಾಗಿ 500ಕ್ಕೂ ಹೆಚ್ಚು ಜನರಿಗೆ ಗಾಯ

Continue Reading