ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ : ಸಚಿವ ಜಮೀರ್ ಅಹ್ಮದ್ ಹೇಳಿಕೆ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಜಮೀರ್ ಹಣ ಪಡೆದು ಮನೆ ನೀಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಆರ್ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕು ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ. ದುಡ್ಡು ತಗೊಂಡವರು ಒಳ್ಳೆದು ಆಗ್ತಾರಾ.. ? ಉದ್ದಾರ ಆಗುತ್ತಾರಾ..ದೇವರು ಒಳ್ಳೆದು ಮಾಡ್ತಾರಾ ಎಂದು ಸಚಿವ ಜಮೀರ್ ಹೇಳಿದರು. ದುಡ್ಡು ಪಡೆದು ಬಡವರಿಗೆ ಮನೆ ಹಂಚಬೇಕಾ..? ಹಾಗೆ ಮಾಡಿದ್ರೆ ನಮ್ಮ ಕುಟುಂಬಕ್ಕೆ ಒಳ್ಳೆದಾಗುತ್ತಾ…? ಎಂದರು. ಯಾವುದೇ ಆರೋಪ ಮಾಡಿದ ಹೆಸರು ಹೇಳಬೇಕಲ್ವಾ..? ಬೇಕಾದರೆ ಇದರ ತನಿಖೆಯನ್ನು ಸಿಬಿಐಗೂ ಕೊಡಿ..ಬಿ.ಆರ್ …

Continue Reading

ಪುತ್ತೂರು : ಫಝಲ್ ಕೋಯಮ್ಮ ತಂಞಾಲ್ (ಖ ಸಿ) ಕೂರತ್ ರವರ ಉರೂಸ್ ಕಾರ್ಯಕ್ರಮ ಪ್ರಯುಕ್ತ ಜೂನ್ 26 ರಿಂದ 27 28 29 ರವರೆಗೆ ನಡೆಯಲಿರುವ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ಇಂದು ನಡೆಯಿತು.

 

Continue Reading

2ನೇ ಶನಿವಾರ ಹಾಗೂ 4ನೇ ಶನಿವಾರ ರಜೆ ರದ್ದು : ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಸುಪ್ರೀಂ ಕೋರ್ಟ್ ಕಚೇರಿಗಳ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದ ರಜೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಈ ಆದೇಶ ಜಾರಿಗೆ ಬಂದಿದ್ದು ರಾಷ್ಟ್ರಪತಿಯವರ ಅನುಮತಿ ಅಂಕಿತವೂ ದೊರೆತಿದೆ. ಜೂ. 14 ರಿಂದಲೇ ಈ ಆದೇಶ ಜಾರಿಯಾಗಿರುವುದರಿಂದ ಇನ್ನು ಮುಂದೆ ಯಾವುದೇ ಶನಿವಾರ ಸುಪ್ರೀಂ ಕೋರ್ಟ್ ಕಚೇರಿಗಳ ಸರ್ಕಾರಿ ನೌಕರರಿಗೆ ರಜೆ ಇರುವುದಿಲ್ಲ. ಹೀಗಾಗಿ ಇನ್ನು ಮುಂದೆ ಗೊತ್ತುಪಡಿಸಿದ ರಜಾ ದಿನಗಳ ಹೊರತು ಪ್ರತಿದಿನ 5.00 ಗಂಟೆಯವರೆಗೆ ಕೋರ್ಟ್‌ ಕಾರ್ಯ ನಿರ್ವಹಿಸಲಿದ್ದು, 4.30 …

Continue Reading

ಮಂಗಳೂರು: ಪಾಲಿಕೆ ಕಚೇರಿಗೆ ಲೋಕಾಯುಕ್ತ ದಾಳಿ – ವ್ಯಕ್ತಿಯ ಬಳಿ 5 ಲಕ್ಷ ರೂ. ನಗದು ಪತ್ತೆ

ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆ ಕಚೇರಿಗೆ ದಾಳಿ ನಡೆಸಿದ್ದಾರೆ.ಬೆಳಗ್ಗೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಪಾಲಿಕೆಯ ಎಂಜಿನಿಯರಿಂಗ್, ನಗರ ಯೋಜನೆ, ಕಂದಾಯ, ಲೆಕ್ಕಪತ್ರ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ವಿಭಾಗಳಲ್ಲಿರುವ ಕಡತಗಳನ್ನು ಪರಿಶೀಲಿಸಿದ್ದಾರೆ. ಆಯಾ ವಿಭಾಗದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ. ಕೆಲವು ಕಡತಗಳು ನಿಗದಿತ ಸಮಯದಿಂದ ವಿಲೇವಾರಿ ಆಗದೆ ಬಾಕಿ ಇರುವ ಬಗ್ಗೆಯೂ ಅಧಿಕಾರಿ – ಸಿಬಂದಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರ ಆರೋಪಕ್ಕೆ ಸಂಬಂಧಪಟ್ಟ …

Continue Reading

ಪುತ್ತೂರು: ಜು.12ಕ್ಕೆ ರಾಷ್ಟ್ರೀಯ ಲೋಕ್ ಅದಾಲತ್.

ಪುತ್ತೂರು:ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ಜು.12ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ ಇದಾಗಿದ್ದು ಈ ಬಾರಿ 7 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿಯನ್ನು ಹೊಂದಲಾಗಿದೆ.ಹೆಚ್ಚಿನ ಪ್ರಕರಣ ಇತ್ಯರ್ಥ ಆಗಲು ಎಲ್ಲರ ಸಹಕಾರ ಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ, ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯದ ನ್ಯಾಯಧಿಶೆ ಪ್ರಕೃತಿ ಕಲ್ಯಾಣ್‌ಪುರ ಹೇಳಿದರು. …

Continue Reading

ಮಂಗಳೂರು ಮಹಾನಗರಪಾಲಿಕೆಗೆ ಲೋಕಾಯುಕ್ತ ಮಿಂಚಿನ ದಾಳಿ: ಇಂಜಿನಿಯರ್, ಕಂದಾಯ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಲೋಕಾ ಅಧಿಕಾರಿಗಳು.

ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆಗೆ ಮಿಂಚಿನ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಘಟನೆ ವರದಿಯಾಗಿದೆ. ಏಕಕಾಲಕ್ಕೆ ಆರು ತಂಡಗಳು ದಾಳಿ ನಡೆಸಿ ಮಹಾನಗರ ಪಾಲಿಕೆಯ ಕಡತ ಪರಿಶೀಲನೆ ನಡೆಸಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ವಿಪರೀತವಾಗಿ ತಾಂಡವವಾಡುತ್ತಿದ್ದು, ಬ್ರೋಕರ್ಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಇಲ್ಲಿ ಲಂಚ ಕೊಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು …

Continue Reading

ಕೂರತ್ ತಂಙಳ್ ಪ್ರಥಮ ಉರೂಸ್ .26 ರಿಂದ 29 ರ ತನಕ ನಡೆಯಲಿದೆ.

ಕೂರತ್ ತಂಙಳ್ ಪ್ರಥಮ ಉರೂಸ್ ಕಾರ್ಯಕ್ರಮವು ಇದೇ ಬರುವ ದಿನಾಂಕ : 26 ರಿಂದ 29 ರ ತನಕ ನಡೆಯಲಿದೆ . ತಾವೆಲ್ಲರೂ ಮಹಾನ್ಮರಾದ ಕೂರ ತಂಞಲ್ ರವರ ಈ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕು # ರಫೀಕ್ ಎಂ ಎ ಸವಣೂರು  18 ನ್ಯೂಸ್ ಪುತ್ತೂರು . (ರಿಪೋರ್ಟರ್ ).

Continue Reading

ಮನೆ, ಕಟ್ಟಡ ನಿರ್ಮಾಣಕ್ಕೆ ಉತ್ತಮ ಆಯ್ಕೆ “ತಾಜ್ ಬಿಲ್ಡರ್ಸ್ “

ಮನೆ, ಕಟ್ಟಡ ನಿರ್ಮಾಣದಲ್ಲಿ ದಕ್ಷಿಣ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ ‘   ತಾಜ್ ಕನ್ಟ್ರಕ್ಷಣ್ & ಬಿಲ್ಡರ್ಸ್ ‘ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುತ್ತಿವೆ. ಗ್ರಾಹಕರಿಗೆ ಉತ್ತಮ ಬಜೆಟ್ ನಲ್ಲಿ ಮನೆ, ಕಟ್ಟಡ ನಿರ್ಮಿಸಿಕೊಡುವುದರಲ್ಲಿ ತಾಜ್ ಬಿಲ್ಡರ್ಸ್ , ಸೈ ಎನಿಸಿಕೊಂಡಿದೆ. ತನ್ನ ಅತ್ಯುತ್ತಮ ಸೇವೆಯ ಮೂಲಕ ಸಂಸ್ಥೆಯು ಎಲ್ಲೆಡೆ ಛಾಪು ಮೂಡಿಸಿದೆ. ಮಂಗಳೂರು , ಉಳ್ಳಾಲ,ಉಡುಪಿ , ಪುತ್ತೂರು ,ಸುಳ್ಯ , ಕಡಬ , ಬಂಟ್ವಾಳ , ಬೆಳ್ತಂಗಡಿ , ಬ್ರಾಂಚ್ ಗಳು ತೆರೆದು ಕೊಂಡು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸೌಲಭ್ಯಗಳನ್ನು ನೀಡುತ್ತಿವೆ. …

Continue Reading