ಪುತ್ತೂರು : ಇಲ್ಲಿನ ಶಾಸಕ ಅಶೋಕ್ ರೈ ಅವರು ಕಚೇರಿಯಲ್ಲಿ ಜೂ.16ರಂದು ಸಾರ್ವಜನಿಕ ಆಹವಾಲು ಸ್ವೀಕರಿಸಿದರು.
ಸಾರ್ವಜನಿಕ ಉದ್ದೇಶದಿಂದ ಸವಣೂರು ಮೆಸ್ಕಾಂ ಕಚೇರಿಗೆ ಖಾಯಂ ಜೂನಿಯರ್ ಇಂಜಿನಿಯರ್ ಗಳನ್ನು ನೇಮಿಸುವಂತೆ ನಮ್ಮ ಮಾಧ್ಯಮ ದಿಂದ ಮನವಿ ನೀಡಲಾಯಿತು .ಕಳೆದ 2 ವರ್ಷಗಳಿಂದ ಮೆಸ್ಕಾಂ ಕಚೇರಿಯಲ್ಲಿ ಖಾಯಂ (ಜೆ. ಇ ) ಜೂನಿಯರ್ ಇಂಜಿನಿಯರ್ ಇಲ್ಲವೆಂದು ಊರಿನ ಸ್ಥಳೀಯರು ನಮ್ಮ ಮಾಧ್ಯಮಕ್ಕೆ ದಿನಂ ಪ್ರತಿ ಸಮಸ್ಯೆಗಳನ್ನು ಹೇಳಿ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.ಯಾವಾಗಲೂ ವಿದ್ಯುತ್ ಸಮಸ್ಯೆಗಳು ,ಗುತ್ತಿಗೆದಾರರೂ ಖಾಯಂ ಜೆ ಇ ಯವರನ್ನು ನೇಮಿಸುವಂತೆ ಕೋರಿದರು . ಸರಿಯಾದ ಸಮಯಕ್ಕೆ ದಾಖಲಾತಿ ನೀಡಿದರೂ ಸರಿಯಾಗಿ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ , ಕೃಷಿ ನೀರಾವರಿ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ನೋಂದಾಯಿಸಿ ಶಾಖೆಗೆ ಬಂದರೆ , ಟಿ ಸಿ ಯಲ್ಲಿ ಲೋಡ್ ಇಲ್ಲ ವೆನ್ನುತ್ತಾರೆ , ಪ್ರಭಾರ ಜೆ ಇ . ಇದರಿಂದ ಗುತ್ತಿಗೆ ದಾರರು ಆಕ್ರೋಶ. ವ್ಯಕ್ತ ಪಡಿಸಿದರು ಈ ತರಹ ಇರುವ ಈ ಶಾಖೆಗೆ ಇನ್ನು ಮಳೆ ಪ್ರಾರಂಭಗೊಂಡಿದೆ ಹಳವು ಕಡೆಗಳಲ್ಲಿ ಕಂಬ ,ಮುರಿಯವುದು ಇನ್ನಿತರ ಹೆಚ್ಚಿನ ವಿದ್ಯುತ್ ಸಮಸ್ಯೆಗಳು ಇರುತ್ತದೆ ಗ್ರಾಹಕರ ಪಾಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಾಗಿ ಖಾಯಂ ಜೂನಿಯರ್ ಇಂಜಿನಿಯರ್ ನೇಮಿಸಬೇಕೆಂದು 18 ನ್ಯೂಸ್ ಪುತ್ತೂರು ಮಾಧ್ಯಮದ ಮೂಲಕ ಶಾಸಕರಿಗೆ ಮನವಿ ನೀಡಲಾಯಿತು .ಈ ಮನವಿಗೆ ಸ್ಪಂಧಿಸಿದ ಶಾಸಕರು ಮುಂದಿನ ದಿನಗಳಲ್ಲಿ ಖಾಯಂ ಜೆ ಇ ಯವರನ್ನು ನೇಮಿಸುವುದಾಗಿ ಮಾಧ್ಯಮಕ್ಕೆ ಭರವಸೆಯನ್ನು ತಿಳಿಸಿದರು .